
13th May 2025
ಕುಷ್ಟಗಿ ೧೩ ಇದೇ ತಿಂಗಳು ದಿನಾಂಕ ೧೫ ಗುರುವಾರ ಬೆಳಿಗ್ಗೆ ೯/೪೫ ಕ್ಕೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣನವರಿಂದಾ ಕುಷ್ಟಗಿಯ ರೈಲ್ವೆ ಸ್ಟೇಶನ್ ಮೂಲಕ ಕುಷ್ಟಗಿ ಯಿಂದ ಗದಗವರೆಗೆ ನೂತನ ರೈಲ್ವೆ ಚಾಲನೆ ಸಿಗುತ್ತಿರುವದು ಸಂತಸ ತಂದಿದೆ.
ಗದಗ - ವಾಡಿ ರೈಲು ಮಾರ್ಗದ ಕನಸು ಈಗಲಾದರೂ ಈಡೇರಿಕೆಗೆ ಅವಕಾಶ ದಕ್ಕಿದ್ದು ಇದರ ಹಿಂದೆ ಹಲವಾರು ಸಂಘ ಸಂಸ್ಥೆಗಳ ಹೋರಾಟದ ನೆರಳು ಇದೆ.
ಕಳೆದ ೨೮ ವರ್ಷಗಳ ಹಿಂದೆ ಕನ್ನಡ ಕ್ರಿಯಾ ಸಮಿತಿಯ ತಾಲೂಕು ಘಟಕವು ಇಲ್ಲಿನ ತಹಶಿಲ್ದಾರ ಕಛೇರಿ ಮುಂದೆ ಕುಷ್ಟಗಿ ಯಿಂದ ರೈಲು ಸಂಪರ್ಕಕ್ಕೆ ಒತ್ತಾಯಿಸಿ ೧೯೯೭ ರಲ್ಲಿ ಗದಗ ವಾಡಿ ರೈಲು ಮಾರ್ಗದ ಕಾಮಗಾರಿ ಆರಂಭಿಸಲು ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿತ್ತು.
ತಾಲೂಕು ಕನ್ನಡ ಕ್ರಿಯಾ ಸಮಿತಿಯ ತಾಲೂಕು ಅಧ್ಯಕ್ಷ ರವಿಂದ್ರ ಬಾಕಳೆ ಗೌರವಾಧ್ಯಕ್ಷ ಶರಣಪ್ಪ ವಡಗೇರಿ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮನೋಹರ ಬಡಿಗೇರೆ ಬಿಜಕಲ್,ಸಂತೋಷ ಜೋಶಿ, ಮನೋಹರ ಕಮ್ಮಾರ,ಶೇಖಪ್ಪ ಪಾಟೀಲ್, ರಾಜು ಕೆಂಚನಗೌಡಾ,ಕುಮಾರ ಶೆಟ್ಟರ ಸೇರಿದಂತೆ ಅನೇಕರು ಭಾಗವಹಿಸಿ ತಹಶಿಲ್ದಾರ ಮುಖಾಂತರ ಗದಗ ವಾಡಿ ರೈಲು ಮಾರ್ಗ ಶೀಘ್ರವಾಗಿ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು ಸ್ಮರಣೀಯ .
ಅಂದು ಹೋರಾಟ ಮಾಡಿದ ನಂತರ ಕಾಮಗಾರಿ ಆಮೇಗತಿಯಲ್ಲಿ ಆರಂಭವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ನಡೆದ ಗದಗ ವಾಡಿ ರೈಲು ಮಾರ್ಗ ಕುಷ್ಟಗಿ ಯಿಂದ ಹುಬ್ಬಳ್ಳಿ ವರೆಗೆ ಪೂರ್ಣಗೊಂಡ ಪರಿಣಾಮ ಕುಷ್ಟಗಿ ಸ್ಟೇಶನ್ ನಲ್ಲಿ ಚಾಲನೆ ಸಿಗುತ್ತಿರುವದಕ್ಕೆ ಕನ್ನಡ ಕ್ರಿಯಾ ಸಮಿತಿಯ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಕುಷ್ಟಗಿ ತಾಲೂಕು ಕನ್ನಡ ಕ್ರಿಯಾ ಸಮಿತಿಯ ತಾಲೂಕು ಅಧ್ಯಕ್ಷ ರವಿಂದ್ರ ಬಾಕಳೆ ಗೌರವಾಧ್ಯಕ್ಷ ಶರಣಪ್ಪ ವಡಗೇರಿ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮನೋಹರ ಬಡಿಗೇರೆ ಬಿಜಕಲ್,ಸಂತೋಷ ಜೋಶಿ, ಮನೋಹರ ಕಮ್ಮಾರ,ಶೇಖಪ್ಪ ಪಾಟೀಲ್, ರಾಜು ಕೆಂಚನಗೌಡಾ,ಕುಮಾರ ಶೆಟ್ಟರ ಸೇರಿದಂತೆ ಅನೇಕರು ಭಾಗವಹಿಸಿ ತಹಶಿಲ್ದಾರ ಮುಖಾಂತರ ಗದಗ ವಾಡಿ ರೈಲು ಮಾರ್ಗ ಶೀಘ್ರವಾಗಿ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿ ಮತ್ತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು ಸ್ಮರಣೀಯವಾಗಿದೆ ಎಂದು ರವೀಂದ್ರ ಬಾಕಳೆ ತಿಳಿಸಿದ್ದಾರೆ.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.